ಕೆ.ಬಾಬುರಾಯ ಶೆಣೈ

Update: 2019-07-29 14:49 GMT

ಉಡುಪಿ, ಜು.29: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ದಾನಿ ಕೆ. ಬಾಬುರಾಯ ಶೆಣೈ(69) ಸೋಮವಾರ ಮುಂಜಾನೆ ಕನ್ನರ್ಪಾಡಿಯ ಸ್ವಗೃಹ ದಲ್ಲಿ ಹೃದಯಘಾತದಿಂದ ನಿಧನರಾದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಯಕ್ಷಗಾನ ಕಲೆಗೆ ವಿಶೇಷವಾಗಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತಿದ್ದ ಶೆಣೈ, ಉಡುಪಿಯ ಯಕ್ಷಗಾನ ಕಲಾರಂಗ, ಉಪ್ಪಿನಕುದ್ರು ಕಾಮತರ ಗೊಂಬೆಯಾಟ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಸಿಂಜಿಕೇಟ್ ಬ್ಯಾಂಕಿನ ತಲ್ಲಿಕೇರಿ (ಕೇರಳ), ಮಹಾರಾಷ್ಟ್ರದ ಪುಣೆ ಸೇರಿದಂತೆ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿದ ಅವರು ಕುಂದಾಪುರ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವಾ ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ