ಎಟಿಎಂನಲ್ಲಿ ಸಿಕ್ಕಿದ ನಗದು ಬ್ಯಾಂಕ್‍ಗೆ ಹಿಂದಿರುಗಿಸಿದ ಗ್ರಾಹಕ

Update: 2019-08-03 12:31 GMT
ಸಾಂದರ್ಭಿಕ ಚಿತ್ರ

ಶೃಂಗೇರಿ, ಆ.3: ಪಟ್ಟಣದ ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ನಗದು ಪಡೆಯಲು ತೆರಳಿದ್ದ ವ್ಯಕ್ತಿಯೊಬ್ಬರಿಗೆ ಎಟಿಎಂನಲ್ಲಿ ಹತ್ತು ಸಾವಿರ ನಗದು ದೊರಕಿದ್ದು, ಅದನ್ನು ಪ್ರಾಮಾಣಿಕವಾಗಿ ಬ್ಯಾಂಕ್‍ಗೆ ತಲುಪಿಸಿದ ಘಟನೆ ಗುರುವಾರ ವರದಿಯಾಗಿದೆ.

ಶ್ರೀಮಠದ ಸಮೀಪವಿರುವ ಎಟಿಎಂಗೆ ತೆರಳಿದ್ದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹೊಸ್ತೋಟ ಸತೀಶ್ ಗೆ ಎಟಿಎಂನಲ್ಲಿ ಹತ್ತು ಸಾವಿರ ರೂ ನಗದು ದೊರಕಿದೆ. ಗ್ರಾಹಕರೊಬ್ಬರು ಎಟಿಎಂನಿಂದ ಡ್ರಾ ಮಾಡಿದ ಹಣವನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ಸತೀಶ್ ಹಣವನ್ನು ಸ್ಥಳಿಯ ಕರ್ಣಾಟಕ ಬ್ಯಾಂಕ್ ಶಾಖೆಗೆ ತಲುಪಿಸಿದರು. ಸತೀಶ್‍ರವರು ಎಟಿಎಂನಿಂದ ಹಣ ಪಡೆದಿದ್ದು, ಇದರ ಹಿಂದೆ ಪಡೆದ ಸಂಖ್ಯೆ ಆಧಾರದಲ್ಲಿ ಹಣ ಪಡೆದ ವ್ಯಕ್ತಿ ತೀರ್ಥಹಳ್ಳಿಯ ಗ್ರಾಹಕರದ್ದಾಗಿತ್ತು ಎಂದು ಖಚಿತಗೊಂಡಿದೆ.

ಹಣ ಮರೆತು ಹೋಗಿದ್ದ ಗ್ರಾಹಕರು ಮತ್ತೆ ಎಟಿಎಂ ಬಳಿ ಬಂದಾಗ ಎಟಿಎಂ ಕಾವಲುಗಾರ ಬ್ಯಾಂಕ್‍ಗೆ ತೆರಳಲು ಸೂಚಿಸಿದ್ದಾರೆ. ಅಗತ್ಯ ದಾಖಲೆ ಪಡೆದ ವ್ಯವಸ್ಥಾಪಕರು ಗ್ರಾಹಕರಿಗೆ ನಗದು ಹಿಂದಿರುಗಿಸಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News