ಮೂಡಿಗೆರೆಯಲ್ಲಿ ಮಳೆಯಬ್ಬರ

Update: 2019-08-05 08:10 GMT

ಚಿಕ್ಕಮಗಳೂರು, ಆ.5: ಮೂಡಿಗೆರೆ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಆಲೇಖಾನ್, ಚಾರ್ಮಾಡಿಯಲ್ಲಿ ಜನತೆ ತತ್ತರಿಸಿದ್ದಾರೆ. ತಾಲೂಕಿನಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚಾರ್ಮಾಡಿಯಿಂದ ಆಲೇಖಾನ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಹೊರಟ್ಟಿ ಗೇಟ್ ಬಳಿ ಗುಡ್ಡ ಕುಸಿದಿದೆ. ಇದರಿಂದ 50ಕ್ಕೂ ಹೆಚ್ಚು ಮನೆಗಳಿರುವ ಹೊರಟ್ಟ ಗ್ರಾಮದ ಆಲೇಖಾನ್ ಗೆ ಸಂಪರ್ಕ ಕಡಿತಗೊಂಡಿದೆ.

ಭಾರೀ ಮಳೆಯಿಂದ ಚಾರ್ಮಾಡಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News