ಸಿಟಿ ಬಸ್‍ನಲ್ಲಿ ಪಿಕ್ ಪಾಕೆಟ್: ಆರೋಪಿಯ ಬಂಧನ

Update: 2019-08-18 11:42 GMT

ಶಿವಮೊಗ್ಗ, ಆ.18: ಸಿಟಿ ಬಸ್‍ನಲ್ಲಿ ಪ್ರಯಾಣಿಕರೋರ್ವರಿಂದ ಸಾವಿರಾರು ರೂ. ಅಪಹರಿಸಿ ಪರಾರಿಯಾಗಿದ್ದ ಆರೋಪದ ಮೇರೆಗೆ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ಬುದ್ದನಗರ ಬಡಾವಣೆಯ ನಿವಾಸಿ ನದೀಮ್ ಯಾನೆ ನದ್ದು (20) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಎಸ್.ಪಿ., ಎ.ಎಸ್.ಪಿ, ಡಿವೈಎಸ್‍ಪಿರವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್, ಪಿಎಸ್‍ಐ ಹೆಚ್.ತಿಮ್ಮಯ್ಯ ಮತ್ತವರ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈತ ಅಪಹರಿಸಿದ್ದ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಘಟನೆ ಹಿನ್ನೆಲೆ: 17-8-2019 ರಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಲೋಕೇಶಪ್ಪರವರು ಸಿಟಿ ಬಸ್‍ನಲ್ಲಿ ಪ್ರಯಾಣಿಸುವಾಗ ಮೀನಾಕ್ಷಿ ಭವನದ ಹತ್ತಿರ ಅವರ ಜೇಬಿನಲ್ಲಿದ್ದ 25 ಸಾವಿರ ರೂ.ಗಳನ್ನು ಆರೋಪಿ ನದೀಮ್ ಅಪಹರಿಸಿ ಪರಾರಿಯಾಗಿದ್ದ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News