ಖಾತೆ ಹಂಚಿಕೆಯಲ್ಲೂ ಬಿಜೆಪಿ ಹೈಕಮಾಂಡ್ ಮಾತೇ ಫೈನಲ್

Update: 2019-08-22 05:16 GMT

ಬೆಂಗಳೂರು, ಆ.22: ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದರೂ, ಸಚಿವರ ಖಾತೆ ಹಂಚಿಕೆಯಾಗಿಲ್ಲ.

ಸಚಿವರ ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಇದೀಗ ಖಾತೆ  ಹಂಚಿಕೆಯನ್ನು ಮಾಡಲಿದೆ. ಇಂದು ಅಥವಾ ನಾಳೆ  ಹೈಕಮಾಂಡ್ ನಿರ್ದೇಶನದಂತೆ ಖಾತೆ ಹಂಚಿಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

25 ದಿನಗಳ ಕಾಲ ಏಕಾಂಗಿಯಾಗಿದ್ದ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ 17 ಸಚಿವರ ಸೇರ್ಪಡೆಯಾಗಿದ್ದರೂ, ಅವರಿಗೆ ಖಾತೆ ಸಿಕ್ಕಿಲ್ಲ. ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಯಾರಿಸಿರುವ ಪಟ್ಟಿಗೆ ಹೈಕಮಾಂಡ್ ಇನ್ನೂ ಒಪ್ಪಿಗೆ ನೀಡಿಲ್ಲ.

ಈ ನಡುವೆ ಮಾಜಿ ಉಪ ಮುಖ್ಯ ಮಂತ್ರಿ ಆರ್.ಅಶೋಕ್ ತಮಗೆ ಗೃಹ ಖಾತೆ ನೀಡುವಂತೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News