ಮಹಿಳೆಯ ಕೊಲೆ ರಹಸ್ಯ ಬಯಲು: ಇಬ್ಬರು ಆರೋಪಿಗಳ ಬಂಧನ

Update: 2019-08-22 18:52 GMT

ಮಂಡ್ಯ, ಆ.22: ಮಳವಳ್ಳಿ ತಾಲೂಕು ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲ್ಲಂಬಳ್ಳಿ ಗ್ರಾಮದ ಆ.17 ರಂದು ಪತ್ತೆಯಾಗಿದ್ದ ಮಹಿಳೆಯ ಶವದ ವಿಳಾಸ ಪತ್ತೆಯಾಗಿದ್ದು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಮಳವಳ್ಳಿ ತಾಲೂಕಿನ ದೊಡ್ಡಬಾಗಿಲು ಗ್ರಾಮದ ರಾಚಯ್ಯ ಅವರ ಮಗಳು ಪ್ರೇಮಕುಮಾರಿಯ ಶವವಾಗಿದ್ದು, ಸಿಪಿಐ ಎಂ.ಧರ್ಮೇಂದ್ರ, ಬೆಳಕವಾಡಿ ಠಾಣೆಯ ಪಿಎಸ್ಸೈ ಉಮಾಪತಿ, ಕಿರುಗಾವಲು ಠಾಣೆಯ ಪಿಎಸ್ಸೈ ಎಂ.ಶಿವಮಾದಯ್ಯ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಯಾದ ಪ್ರೇಮಕುಮಾರಿ 10 ವರ್ಷಗಳ ಹಿಂದೆ ತನ್ನ ಪತಿಯನ್ನು ತೊರೆದು ಇಬ್ಬರು ಮಕ್ಕಳೊಂದಿಗೆ ತವರು ಮನೆ ದೊಡ್ಡಬಾಗಿಲು ಗ್ರಾಮದಲ್ಲಿ ವಾಸವಿದ್ದು, ಈಕೆಯ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ದೂರದ ಸಂಬಂದಿ ಕೊಲೆ ಆರೋಪಿಯಾಗಿದ್ದಾನೆ.

ಆಕೆಯ ದೂರದ ಸಂಬಂಧಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ನರೆಕ್ಯಾತನಹಳ್ಳಿಯ ಮಹದೇವಶೆಟ್ಟಿ ಹಾಗು ಕುಂತನಹಳ್ಳಿಯ ಸತೀಶ ಬಂಧಿತರು. ಮಹದೇವಶೆಟ್ಟಿ ಆಕೆಯನ್ನು ಕೊಲೆಮಾಡಿ ತನ್ನ ಸಂಬಂಧಿಕ ಸತೀಶನ ನೆರವಿನೊಂದಿಗೆ ಶವವನ್ನು ಹುಲ್ಲಂಬಳ್ಳಿ ಬಳಿ ಇಟ್ಟುಹೋಗಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಸ್ಪಿ ಪರಶುರಾಂ ತಿಳಿಸಿದ್ದಾರೆ.

ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸ್ ತನಿಖಾ ತಂಡವನ್ನು ಪ್ರಶಂಸಿರುವ ಪರಶುರಾಂ, ಅವರಿಗೆ ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News