ಬಿಜೆಪಿ ಮುಖ್ಯ ಕಚೇರಿಗೆ ಅರುಣ್ ಜೇಟ್ಲಿ ಪಾರ್ಥಿವ ಶರೀರ ರವಾನೆ

Update: 2019-08-25 05:16 GMT

ಹೊಸದಿಲ್ಲಿ, ಆ.25:ಅಸ್ವಸ್ಥತೆ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಶನಿವಾರ ನಿಧನರಾದ ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ(66 ವರ್ಷ)ಪಾರ್ಥಿವ ಶರೀರವನ್ನು ಅವರ ದಿಲ್ಲಿಯ ನಿವಾಸದಿಂದ ಬಿಜೆಪಿಯ ಕೇಂದ್ರ ಕಚೇರಿಗೆ ಇಂದು ಬೆಳಗ್ಗೆ ಕೊಂಡೊಯ್ಯಲಾಯಿತು.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:00ರ ತನಕ ಕಾರ್ಯಕರ್ತರ, ಹಿತೈಷಿಗಳ ಅಂತಿಮ ದರ್ಶನಕ್ಕಾಗಿ ಜೇಟ್ಲಿ ಪಾರ್ಥಿವ ಶರೀರ ಇಡಲಾಗುವುದು. ಆ ಬಳಿಕ ಮೃತದೇಹವನ್ನು ಮೆರವಣಿಗೆಯ ಮೂಲಕ ದಿಲ್ಲಿಯ ನಿಗಮ್ ಬೋಧ್ ಘಾಟ್ಗೆ ಸಾಗಿಸಿ ಮಧ್ಯಾಹ್ನ 2:30ರ ಸುಮಾರಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News