ಪ.ಬಂಗಾಳ:ತೃಣಮೂಲ ನಾಯಕ ಗುಂಡೇಟಿಗೆ ಬಲಿ
Update: 2019-08-25 16:43 GMT
ಕೋಲ್ಕತಾ,ಆ.25: ಬೈಕ್ನಲ್ಲಿದ್ದ ದುಷ್ಕರ್ಮಿಗಳು ತೃಣಮೂಲ ನಾಯಕನೋರ್ವನನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಪಶ್ಚಿಮ ಬರ್ದ್ವಾನ ಜಿಲ್ಲೆಯ ಕಲ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಆರೋಪಿಗಳನ್ನು ಮೃತರ ಕುಟುಂಬದವರು ಗುರುತಿಸಿದ್ದಶಾರೆ.
ತೃಣಮೂಲ ಕೌನ್ಸಿಲರ್ ಮುಹಮ್ಮದ್ ಖಾಲಿದ್ ಖಾನ್ ಅವರು ರಾತ್ರಿ 11:30ರ ಸುಮಾರಿಗೆ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿದ್ದ ಮೂವರು ಅವರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಮೃತರ ಸೋದರ ಹೇಳಿದ್ದಾರೆ. ಪೊಲೀಸ್ ದೂರಿನಲ್ಲಿ ಕಾದರ್ ಶೇಖ್,ಟಿಂಕು ಶೇಖ್ ಮತ್ತು ಶಾಹಿದ್ ಶೇಖ್ ಎನ್ನುವವರನ್ನು ಶಂಕಿತ ಆರೋಪಿಗಳನ್ನಾಗಿ ಅವರು ಹೆಸರಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.