250 ಭಾರತೀಯರಿಗೆ ಕ್ಷಮೆ ನೀಡಿದ ಬಹರೈನ್

Update: 2019-08-25 17:22 GMT

ಮನಾಮ,ಆ.25: ದೇಶದ ವಿವಿಧ ಜೈಲುಗಳಲ್ಲಿ ಬಂಧಿಯಾಗಿರುವ 250 ಭಾರತೀಯರಿಗೆ ಬಹರೈನ್ ಕ್ಷಮಾದಾನ ನೀಡಿ ಆದೇಶ ಹೊರಡಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿ ಬಹರೈನ್  ಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಲ್ಲಿನ ಸರಕಾರ ಈ ಕ್ರಮ ಕೈಗೊಂಡಿದೆ. ಬಹರೈನ್ ನ ಈ ಮಾನವೀಯ ಸ್ಪಂದನೆಗೆ ಪ್ರಧಾನಿ ತನ್ನ ಕೃತಜ್ಞತೆ ಸೂಚಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಬಹರೈನ್ ಸರಕಾರ 250 ಭಾರತೀಯರಿಗೆ ಕ್ಷಮಾದಾನ ನೀಡಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ವಿದೇಶಗಳ ಜೈಲುಗಳಲ್ಲಿ ಒಟ್ಟು 8,189 ಭಾರತೀಯರು ಬಂಧಿಯಾಗಿದ್ದಾರೆ. ಈ ಪೈಕಿ ಸೌದಿ ಅರೇಬಿಯದಲ್ಲಿ ಅತ್ಯಧಿಕ 1,811 ಭಾರತೀಯರು ಬಂಧಿಯಾಗಿದ್ದರೆ ಯುಎಇಯಲ್ಲಿ 1,392 ಮಂದಿಯಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News