ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆ

Update: 2019-08-31 18:56 GMT

ಹನೂರು: ಗುಣಮಟ್ಟದ ಹಾಲು ಪೂರೈಕೆಯಿಂದ ಮಾತ್ರ ಡೇರಿ ಲಾಭಧಾಯಕವಾಗಿರಲು ಸಾದ್ಯ ಎಂದು ಚಾಮುಲ್ ಉಪ ವ್ಯವಸ್ಥಾಪಕರಾದ  ಶರತ್‍ಕುಮಾರ್ ತಿಳಿಸಿದರು 

ಪಿ.ಜಿ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರು ಪಶು ಸಂಗೋಪನೆಯನ್ನು  ವೈಜ್ಞಾನಿಕವಾಗಿ ಮಾಡಿದ್ದಲ್ಲಿ ಅಧಿಕ ಲಾಭ ಕಾಣಲು ಸಾದ್ಯವಾಗುತ್ತದೆ. ಹಾಲಿನ ಕೊಬ್ಬಿನ ಅಂಶ 3.5 ಕಿಂತ ಹೆಚ್ಚಾಗಿರಬೇಕು, ಹೆಚ್ಚಾದಷ್ಟು ರೈತರು ಉತ್ತಮ ದರ ಪಡೆಯಬಹುದು. ಖನಿಜ ಮಿಶ್ರಣ, ಗೋಧಾರ ಶಕ್ತಿ ಪುಡಿ, ನೆಕ್ಕು ಬಿಲ್ಲೆ, ಜೋಳದ ನುಚ್ಚು, ಪಶು ಆಹಾರ, ಹಸಿರು ಮೇವಿನ ಜೊತೆ ಹೊಣ ಹುಲ್ಲು ಮುಂತಾದ ಸಮತೋಲನ ಆಹಾರ ನೀಡಿದ್ದಲ್ಲಿ ಹಾಲಿನ ಗುಣ ಮಟ್ಟ ಕಾಪಾಡಬಹುದು ಮತ್ತು ಗುಣ ಮಟ್ಟದ ಹಾಲು ಪೂರೈಕೆಯಿಂದ ಮಾತ್ರ ಡೇರಿ ಮತ್ತು ಲಾಭದಾಯಕವಾಗಿರಲು ಸಾದ್ಯ ಎಂದು ತಿಳಿಸಿದರು.

ಹಸುವಿನ ಕೆಚ್ಚಲಿನ ಮೇಲ್ಭಾಗದಲ್ಲಿ ಕೊಬ್ಬಿನ ಅಂಶ ಶೇಕರವಾಗಿದ್ದು ಪೂರ್ಣ ಪ್ರಮಾಣದಲ್ಲಿ ಹಾಲನ್ನು ಹಿಂಡಬೇಕು ಮತ್ತು ಡೇರಿಗೆ ಸ್ಟೀಲ್ ಕ್ಯಾನಿನ ಮುಖಾಂತರ ಹಾಲು ಪೂರೈಕೆ ಮಾಡಬೇಕೆಂದು ತಿಳಿಸಿದರು. 

ಈ ಸಭೆಯಲ್ಲಿ ಚಾಮುಲ್ ವಿಸ್ತರಣಾಧಿಕಾರಿಗಳಾದ ಶ್ರೀಮತಿ ಮಂಜುಳಾ ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‍ನ್ನು ಮಂಡಿಸಿದರು.
ಅಲ್ಲದೇ ಸಭೆಯ ಪ್ರಾರಂಭದಲ್ಲಿ ಚಾಮುಲ್ ಅದ್ಯಕ್ಷರಾದ ಸಿ.ಎಸ್ ಗುರುಮಲ್ಲಪ್ಪರವರು ಹಾಲು ಉತ್ಪಾದಕರನ್ನು ಉದ್ದೇಶಿಸಿ ಮಾತನಾಡಿದರು 

ಈ ಸಂದರ್ಭದಲ್ಲಿ ಅದ್ಯಕ್ಷರಾದ ಮಹದೇವಪ್ಪ,ಚಾಮುಲ್ ವಿಸ್ತರಣಾಧಿಕಾರಿಗಳಾದ ಮಂಜುಳಾ, ಪಿಜಿಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ  ಬಿ ಸ್ವಾಮಿ ಸೇರಿದಂತೆ ಸಿಬ್ಬಂಧಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ರೈತರುಗಳು ಭಾಗವಹಿಸಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News