ಸೋಮವಾರಪೇಟೆ: ವನ್ಯಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರ ಬಂಧನ

Update: 2019-08-31 18:59 GMT

ಸೋಮವಾರಪೇಟೆ: ತಾಲೂಕಿನ ನಿಡ್ತ ಮೀಸಲು ಅರಣ್ಯದಲ್ಲಿ ಉರುಳು ಹಾಕಿ ವನ್ಯಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಅಳಿಲುಗುಪ್ಟೆ ಗ್ರಾಮದ ಎ.ಕೆ.ಪ್ರಸನ್ನ, ಎ.ಎನ್.ಮಲ್ಲೇಶ್, ಅರಗಲ್ಲು ಗ್ರಾಮದ ಎ.ಎನ್.ಪುಷ್ಪರಾಜು ಬಂಧಿತ ಆರೋಪಿಗಳು. ಒಂದು ಬೈಕ್, ಉರುಳು, ಟಾರ್ಚ್‍ಗಳು ಹಾಗು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಚರಣೆಯಲ್ಲಿ ಎ.ಸಿ.ಎಫ್. ನೆಹರು ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಆರ್.ಎಫ್.ಒ ಶಮಾ, ಡಿ.ಆರ್.ಎಫ್.ಒ.,ಪುನಿತ್, ಸಿಬ್ಬಂದಿಗಳಾದ ರಾಜಣ್ಣ, ಯೋಗೇಶ್, ಸಂದೀಪ್, ಅಂತೋಣಿ ಅವರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News