ತನ್ನ ಬೆಂಬಲಿಗನ ಕೆನ್ನೆಗೆ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ: ವೀಡಿಯೊ ವೈರಲ್
Update: 2019-09-04 10:23 GMT
ಮೈಸೂರು: ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬುಧವಾರ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತನ್ನ ಬೆಂಬಲಿಗರೊಬ್ಬರಿಗೆ ಕೆನ್ನೆಗೆ ಹೊಡೆದ ಘಟನೆ ನಡೆದಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಹೊರಹೋಗುವ ವೇಳೆ ಬೆಂಬಲಿಗನ್ನೊಬ್ಬ ಅವರ ಬಳಿಗೆ ಆಗಮಿಸಿ ಫೋನ್ ನೀಡಿದ್ದು, ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಬೆಂಬಲಿಗನ ಕಪಾಳಕ್ಕೆ ಹೊಡೆದಿದ್ದಾರೆ.
ಈ ಘಟನೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.