ಇನ್ನೊಮ್ಮೆ ಈ ರೀತಿ ಹೇಳಿಕೆ ಕೊಟ್ಟರೆ ಸುಮ್ಮನಿರಲ್ಲ: ಸಚಿವ ನಾಗೇಶ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

Update: 2019-09-06 13:23 GMT

ದಾವಣಗೆರೆ, ಸೆ.6: 'ಹಾಲಿನಂತೆ ಮನೆಮನೆಗೆ ಮದ್ಯ ಪೂರೈಕೆ' ಎಂಬ ಅಬಕಾರಿ ಸಚಿವ ನಾಗೇಶ್ ಹೇಳಿಕೆಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮ ಹೇಳಿಕೆಯಿಂದ ಬಿಜೆಪಿ ಪಕ್ಷ ಹಾಗೂ ಸಿಎಂ ಬಿಎಸ್ ವೈ ಗಣತೆಗೆ ಧಕ್ಕೆ ಬರುತ್ತದೆ ಎಂದು ಕಿಡಿಕಾರಿದ್ದಾರೆ.

ನ್ಯಾಮತಿ ತಾಲೂಕಿನ ದೊಡ್ಡಯತ್ತಿನಹಳ್ಳಿ ಗ್ರಾಮದಲ್ಲಿ ಸಚಿವ ನಾಗೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಇನ್ನೊಮ್ಮೆ ಈ ರೀತಿ ಹೇಳಿಕೆ ಕೊಟ್ಟರೆ ನಾನು ಸುಮ್ಮನಿರಲ್ಲ. ನಾನು ಸಹ ಈ ಹಿಂದೆ ಅಬಕಾರಿ ಸಚಿವನಾಗಿದ್ದೆ. ಕಳ್ಳಭಟ್ಟಿ ಮುಕ್ತ ರಾಜ್ಯ‌ಮಾಡಲು ಪ್ರಯತ್ನಿಸಿದ್ದೆ. ಆ ರೀತಿ ಮಾಡಿ. ಆದರೆ ಮನೆ ಮನೆಗೆ ಮದ್ಯ ಹಂಚುವ ಹೇಳಿಕೆ ನೀಡಿದರೆ ಸರಿ ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News