ಶಾಸಕ ರಾಮದಾಸ್ ಕಾರು ಢಿಕ್ಕಿ: ಬೈಕ್ ಸವಾರನಿಗೆ ಗಾಯ

Update: 2019-09-06 15:04 GMT

ಮಂಡ್ಯ, ಸೆ.6: ನಗರದ ಹೊರವಲಯದ ಹೊಟೇಲೊಂದರ ಮುಂದೆ ಮೈಸೂರಿನ ಶಾಸಕ ಎ.ರಾಮದಾಸ್ ಅವರ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ರಾಮದಾಸ್ ಮೈಸೂರಿನಿಂದ ಬೆಂಗಳೂರಿಗೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ಮಂಡ್ಯ ತಾಲೂಕಿನ ಬಿಳಗೂಲಿ ಗ್ರಾಮದ ಶಿವಣ್ಣ(50) ಗಾಯಗೊಂಡಿದ್ದಾರೆ. ತಕ್ಷಣ ರಾಮದಾಸ್ ಅವರೇ ಗಾಯಾಳುವನ್ನು ಮಿಮ್ಸ್ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News