ಇಸ್ರೋ ವಿಜ್ಞಾನಿಗಳ ಸಾಧನೆ ನಮಗೆ ಹೆಮ್ಮೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-09-07 13:00 GMT

ಬೆಂಗಳೂರು, ಸೆ. 7: ಇಸ್ರೋ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿಜ್ಞಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-2 ಎಂಬುದೇ ಅತಿದೊಡ್ಡ ಮುನ್ನೋಟ. ಈ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಆದರೆ, ನಮ್ಮ ದೇಶದ ಇಸ್ರೋ ವಿಜ್ಞಾನಿಗಳು ಈ ಯಾನವನ್ನು ಅಂತಿಮ ಘಟ್ಟದ ಮುಂಚೂಣಿಗೆ ಕೊಂಡೊಯ್ದಿರುವುದಕ್ಕೆ ಅಭಿನಂದಿಸಿದ್ದು, ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಇಳಿಯಲು ಇನ್ನೊಂದೆ ಹೆಜ್ಜೆ ಬಾಕಿ ಉಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News