ಅನರ್ಹ ಶಾಸಕರ ಪ್ರಕರಣ ವಿಳಂಬವೇ ಸಮಸ್ಯೆ: ಪ್ರತಾಪ್‌ ಗೌಡ ಪಾಟೀಲ್

Update: 2019-09-13 12:51 GMT

ಬೆಂಗಳೂರು, ಸೆ.13: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಪ್ರಕರಣವು ವಿಳಂಬವಾಗುತ್ತಿದೆ ಎಂಬ ಆತಂಕ ಬಿಟ್ಟರೆ ಬೇರೆ ಯಾವುದೇ ಸಮಸ್ಯೆಯಿಲ್ಲ ಇಲ್ಲವೆಂದು ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಸಭೆ ಕುರಿತು ಯಾವುದೇ ಮಾಹಿತಿ ಇಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅತಂತ್ರ ಸ್ಥಿತಿ ಇಲ್ಲವೆಂದು ತಿಳಿಸಿದ್ದಾರೆ.

ನ್ಯಾಯಾಲವು ಅನರ್ಹ ಶಾಸಕರ ಪ್ರಕರಣವನ್ನು ನಾವು ಹೇಳಿದಾಗ ತೆಗೆದುಕೊಳ್ಳಬೇಕೆಂಬ ನಿಯಮವಿಲ್ಲ. ಇವತ್ತಲ್ಲ ನಾಳೆ ಇತ್ಯರ್ಥವಾಗುತ್ತದೆ. ಈ ತಿಂಗಳ ಒಳಗೆ ಪ್ರಕರಣ ಮುಗಿಯುವ ವಿಶ್ವಾಸವಿದೆ. ಉಳಿದಂತೆ ಏನೂ ತೊಂದರೆ ಇಲ್ಲ. ಕ್ಷೇತ್ರದಲ್ಲಿ ಎಲ್ಲಾ ಕೆಲಸ ನಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News