ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ
Update: 2019-09-15 18:16 GMT
ಮಂಡ್ಯ, ಸೆ.15: ಮದ್ದೂರು ತಾಲೂಕಿನ ಕೀಳಘಟ್ಟ ಗ್ರಾಮದಲ್ಲಿ ರೈತನೊರ್ವ ಸಾಲಭಾದೆ ತಾಳದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಮಲ್ಲಯ್ಯ ಅವರ ಪುತ್ರ ಲೋಕೇಶ್ (40) ಮೃತ ರೈತ. ಇವರಿಗೆ 1.5 ಎಕರೆ ಜಮೀನಿದ್ದು, ರೇಷ್ಮೆ ಮತ್ತು ಭತ್ತ ಬೆಳೆದಿದ್ದರು. ಕೊಳವೆ ಬಾವಿ ಕೊರೆಸಿದ್ದು, ರೇಷ್ಮೆ ಹುಳುವಿನ ಮನೆ ನಿರ್ಮಿಸಿದ್ದರು.
ಕೃಷಿ ಚಟುವಟಿಕೆಗಾಗಿ ಕೀಳಘಟ್ಟ ಪ್ರಾಥಮಿಕ ಸಹಕಾರ ಸಂಘ, ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳ ಬಳಿ ಸುಮಾರು 3 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತ್ನಿ ದೂರು ನೀಡಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.