ಕಾರು- ಬೈಕ್ ಅಪಘಾತ: ಯುವಕ ಮೃತ್ಯು
Update: 2019-09-15 18:32 GMT
ಮಡಿಕೇರಿ ಸೆ.15 : ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಮೈತಾಡಿ ಗ್ರಾಮದ ನಿವಾಸಿ ಹೆಚ್.ಕವನ್ (22) ಮೃತ ಯುವಕ. ಚೆಂಬೆಬೆಳ್ಳೂರು ಒಂಟಿಯಂಗಡಿ ಬಳಿ ಘಟನೆ ನಡೆದಿದ್ದು, ಕವನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಮಂಜು ಸಣ್ಣಪುಟ್ಟ ಗಾಯಗಳೊಂದಿಗೆ ವಿರಾಜಪೇಟೆ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.