ಕೆ.ಗೋಪಾಲ ಶೆಟ್ಟಿ

Update: 2019-09-16 14:13 GMT

ಉಡುಪಿ, ಸೆ.16: ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಹಾವಂಜೆ ಗ್ರಾಮದ ಕೀಳಿಂಜೆ ನಿವಾಸಿ.ಕೆ.ಗೋಪಾಲ ಶೆಟ್ಟಿ (62) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಗೋಪಾಲ ಶೆಟ್ಟಿ ಅವರು ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಇವರ ಹಿರಿಯ ಸಹೋದರರಾಗಿದ್ದು ಅವಿವಾಹಿತರು. ಇವರು ತಾಯಿ ಐವರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಇವರು ಮಣಿಪಾಲ ಪ್ರಧಾನ ಕಚೇರಿ, ಸ್ಥಾಪಕರ ಕಚೇರಿ, ಪೇತ್ರಿ, ಪಡುಬಿದ್ರೆ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಇವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸರ್ ಫೆರ್ನಾಂಡಿಸ್, ಪ್ರಮೋದ್ ಮದ್ವರಾಜ್, ಯು.ಆರ್.ಸಭಾಪತಿ, ಮಹಾಬಲ ಕುಂದರ್ ಮುಂತಾವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ