ವಿಕಲಚೇತನರಿಂದ ಅರ್ಜಿ ಆಹ್ವಾನ

Update: 2019-09-17 14:13 GMT

ಮಂಗಳೂರು, ಸೆ.17: ಬಂಟ್ವಾಳ ತಾಲೂಕಿನ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಪಂಗೆ ಒಬ್ಬರಂತೆ ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ನೇಮಕ ಮಾಡಲು ಅವಕಾಶವಿದೆ.

ಅಳಿಕೆ, ಮಂಚಿ, ಇರಾ, ಕೆದಿಲ, ಕಡೇಶಿವಾಲಯ, ಬರಿಮಾರು, ಇಡ್ಕಿದು, ಅನಂತಾಡಿ, ಪೆರ್ನೆ, ವಿಟ್ಲಮುಡ್ನೂರು, ಬೋಳಂತೂರು, ಕೊಳ್ನಾಡು, ಸಾಲೆತ್ತೂರು, ಕರೋಪಾಡಿ, ಪೆರುವಾಯಿ ಗ್ರಾಪಂಗಳಲ್ಲಿ ಈ ಹುದ್ದೆ ಖಾಲಿಯಿದೆ. ಆಸಕ್ತ ವಿಕಲಚೇತನರು ಅಕ್ಟೋಬರ್ 14ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರು ರಸ್ತೆ, ವಿಟ್ಲ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News