ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ
Update: 2019-09-19 11:58 GMT
ಹೊಸದಿಲ್ಲಿ, ಸೆ.19: ರೋಸ್ ರೆವೆನ್ಯೂ ಕೋರ್ಟ್ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ.
ಶನಿವಾರ ಬೆಳಗ್ಗೆ 11ಕ್ಕೆ ಜಾಮೀನು ಅರ್ಜಿ ಮತ್ತೊಮ್ಮೆ ವಿಚಾರಣೆ ಬರಲಿದೆ. ಈ.ಡಿ.ಪರ ವಾದ ಮಂಡಿಸಿದ ನಟರಾಜ್, ಶಿವಕುಮಾರ್ಗೆ ಜಾಮೀನು ನೀಡಬಾರದು ಎಂದು ವಾದಿಸಿದರು.
ನ್ಯಾಯಾಂಗ ಕಸ್ಟಡಿಯಲ್ಲಿರುವ ಶಿವಕುಮಾರ್ರನ್ನು ಇಂದು ಆಸ್ಪತ್ರೆಯಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ