ನಾಶಿಕ್: ರೈತನ ಮನೆಯಿಂದ 1 ಲಕ್ಷ ರೂ.ಈರುಳ್ಳಿ ಕಳ್ಳತನ!

Update: 2019-09-24 07:29 GMT

ನಾಶಿಕ್, ಸೆ.24: ಈರುಳ್ಳಿಯ ಬೆಲೆ ಜನರಲ್ಲಿ ಕಣ್ಣೀರು ತರಿಸುತ್ತಿರುವುದರ ಮಧ್ಯೆ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ರೈತ ತಾನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 1 ಲಕ್ಷ ರೂ. ಬೆಲೆಬಾಳುವ ಈರುಳ್ಳಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದಾನೆ ಎಂದು ದೂರು ನೀಡಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಈರುಳ್ಳಿ ಬೆಳೆಗಾರ ರಾಹುಲ್ ಬಾಜೀರಾವ್ ಸೋಮವಾರ ಪೊಲೀಸರನ್ನು ಸಂಪರ್ಕಿಸಿ, ಕಲ್ವಾನ್ ತಾಲೂಕಿನಲ್ಲಿ ತನ್ನ ಮನೆಯ ಸ್ಟೋರ್ ರೂಮ್‌ನಲ್ಲಿ 117 ಪ್ಲಾಸ್ಟಿಕ್‌ನಲ್ಲಿ ಈರುಳ್ಳಿಯನ್ನು ದಾಸ್ತಾನು ಇಟ್ಟಿದ್ದೆ. ರವಿವಾರ ಸಂಜೆ ವೇಳೆ 1 ಲಕ್ಷ ರೂ. ಬೆಲೆಬಾಳುವ ಈರುಳ್ಳಿ ಕಳುವಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಸಿಂಗ್ ತಿಳಿಸಿದ್ದಾರೆ.

ರೈತನ ದೂರಿನ ಮೇರೆಗೆ ಕಳ್ಳತನ ಪ್ರಕರಣ ದಾಖಲಿಸಿ ಸ್ಥಳೀಯ ಮಾರುಕಟ್ಟೆ ಹಾಗೂ ನೆರೆಯ ಗುಜರಾತ್‌ನಲ್ಲಿ  ಕಳುವಾಗಿರುವ ರೈತನ ಈರುಳ್ಳಿಯ ಚೀಲಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News