ಬಯಲು ಜಾಗದಲ್ಲಿ ಶೌಚಕ್ಕೆ ಕುಳಿತಿದ್ದ ಇಬ್ಬರು ದಲಿತ ಮಕ್ಕಳನ್ನು ಥಳಿಸಿ ಕೊಂದ ಗುಂಪು

Update: 2019-09-25 08:11 GMT

ಭೋಪಾಲ್ : ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಭಾವ್ಕೇಢಿ ಗ್ರಾಮದಲ್ಲಿ  ಬುಧವಾರ ಬೆಳಗ್ಗೆ ನಡೆದ ಅಘಾತಕಾರಿ ಘಟನೆಯಲ್ಲಿ ಬಯಲು ಪ್ರದೇಶದಲ್ಲಿ ಶೌಚಕ್ಕೆ ಕುಳಿತಿದ್ದ ಇಬ್ಬರು ದಲಿತ ಮಕ್ಕಳನ್ನು ಗುಂಪೊಂದು ಥಳಿಸಿ ಕೊಂದಿದೆ.

ಮೃತ ಮಕ್ಕಳನ್ನು ರೋಶನಿ (12) ಹಾಗೂ ಅವಿನಾಶ್ (10) ಎಂದು ಗುರುತಿಸಲಾಗಿದೆ. ಪಂಚಾಯತ್ ಕಟ್ಟಡದೆದುರು ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮಕ್ಕಳನ್ನು ಥಳಿಸಿ ಕೊಲ್ಲುವ ಮೊದಲು ಆರೋಪಿಗಳು ಅವರ ಫೋಟೊ ಕ್ಲಿಕ್ಕಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News