ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಚಿದಾನಂದ್ ಅಧಿಕಾರ ಸ್ವೀಕಾರ

Update: 2019-10-01 11:56 GMT

ಶಿವಮೊಗ್ಗ, ಅ.1: ಶಿವಮೊಗ್ಗದ ಮಹಾನಗರ ಪಾಲಿಕೆ ಆಯುಕ್ತರಾಗಿ ಚಿದಾನಂದ ವಟಾರೆ ಇಂದು ಅಧಿಕಾರ ಸ್ವೀಕರಿಸಿದರು. 

ಹಿಂದಿನ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ವರ್ಗಾವಣೆಗೊಂಡು ಇಂದಿಗೆ 15 ದಿನಗಳು ಕಳೆದ ಬಳಿಕ ಹೊಸ ಪಾಲಿಕೆ ಆಯುಕ್ತರಾಗಿ ಚಿದಾನಂದ್  ಅಧಿಕಾರ ಸ್ವೀಕರಿಸಿದ್ದಾರೆ.

15 ದಿನಗಳ ವರೆಗೆ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಆಯುಕ್ತರಾಗಿ ಉಸ್ತುವಾರಿ ಆಗಿದ್ದರು. ಕೆಎಎಸ್ ಹಿರಿಯ ಶ್ರೇಣಿಯ ಚಿದಾನಂದ್ ವಟಾರೆ ಈ ಹಿಂದೆ ಬೆಂಗಳೂರಿನ ಚುನಾವಣೆ ಆಯೋಗದಲ್ಲಿ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News