ಈಗ ಜನ ಕ್ಯಾಕರಿಸಿ ಉಗಿತ್ತಿದ್ದಾರೆ, ಎಷ್ಟೆಂದು ಒರೆಸಿಕೊಳ್ಳುತ್ತೀರಿ: ಬಿಜೆಪಿಗೆ ಪ್ರಕಾಶ್ ರಾಜ್ ಟ್ವೀಟ್

Update: 2019-10-04 06:47 GMT

ಬೆಂಗಳೂರು, ಅ.4: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದು ಎರಡು ತಿಂಗಳು ಕಳೆದರೂ ಬಿಡಿಕಾಸು ಬಿಡುಗಡೆ ಮಾಡದ ಕೇಂದ್ರ ಸರಕಾರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು ಬಹು ಭಾಷಾ ನಟ ಪ್ರಕಾಶ್ ರಾಜ್ ಶುಕ್ರವಾರ ಟ್ವೀಟ್ ಮೂಲಕ ಬಿಜೆಪಿಯ ಮುಖಂಡರ ಕಾಲೆಳೆದಿದ್ದಾರೆ.

‘‘ನಾನು ಉಗಿದೆ, ನೀವು ಒರೆಸ್ಕೊಂಡ್ರೀ, ಈಗ ಜನ ಕ್ಯಾಕರಿಸಿ ಉಗೀತಾ ಇದ್ದಾರೆ.ಎಷ್ಟೆಂದು ಒರೆಸಿಕೊಳ್ಳುತ್ತೀರಿ’’ ಎಂದು ‘ಜಸ್ಟ್ ಆಸ್ಕಿಂಗ್’ ಟ್ಯಾಗ್ ಮೂಲಕ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News