ಯುವತಿಯ ಅಪಹರಣ ಯತ್ನ: ಪೊಲೀಸರನ್ನು ಕಂಡು ಕಾರು ಬಿಟ್ಟು ಪರಾರಿ

Update: 2019-10-04 18:56 GMT

ಶಿವಮೊಗ್ಗ, ಅ.4: ಯುವತಿಯೋರ್ವಳನ್ನು ಸಿನಿಮೀಯ ಶೈಲಿಯಲ್ಲಿ ಕಾರಿನಲ್ಲಿ ಅಪಹರಿಸಿದ ಯುವಕರ ತಂಡವೊಂದು, ಪೊಲೀಸರನ್ನು ಕಂಡು ಯುವತಿ ಹಾಗೂ ಕಾರನ್ನು ಬಿಟ್ಟು ಪರಾರಿಯಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. 

ಘಟನೆ ಹಿನ್ನೆಲೆ: ತಾಯಿಯೊಂದಿಗೆ ಮಾಸ್ತಿಕಟ್ಟೆ-ಯಡಿಯೂರು ದೇವಾಲಯಕ್ಕೆ ಯುವತಿ ಆಗಮಿಸಿದ್ದಳು. ಈ ವೇಳೆ ಕಾರಿನಲ್ಲಿ ಬಂದ ನಾಲ್ಕೈದು ಜನ ಯುವಕರು, ಮಾರಕಾಸ್ತ್ರದಿಂದ ಬೆದರಿಕೆ ಹಾಕಿ ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿದ್ದಾರೆ. 

ತೀರ್ಥಹಳ್ಳಿಯ ಕಮ್ಮರಡಿ ಬಳಿ ಪೊಲೀಸರನ್ನ ಕಂಡ ಈ ಗ್ಯಾಂಗ್, ಕಾರು ಹಾಗೂ ಹುಡುಗಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ಘಟನೆಯ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಅಪಹರಣಕಾರರಲ್ಲಿ ಓರ್ವ ಯುವಕನ ಹೆಸರನ್ನು ಯುವತಿ ಹೇಳಿದ್ದಾಳೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News