ಕ್ರಿಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Update: 2019-10-05 18:55 GMT

ಹನೂರು, ಅ.5: ಪಟ್ಟಣದ ಕ್ರಿಸ್ತರಾಜ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರಿಡಾಕೂಟ ಹಾಗೂ ವಸ್ತುಪ್ರದರ್ಶನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳನ್ನು ಕ್ರಿಸ್ತರಾಜ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೋನಾಲ್ಡ್ ಧಾಂತಿ ಮತ್ತು ಶಾಲಾ ಶಿಕ್ಷಕರು ಅಭಿನಂಧಿಸಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಕ್ರಿಸ್ತರಾಜ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

400ಮೀ ರಿಲೇಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಾದ ಗೌತಮ್, ಯೋಗೇಶ್, ಹರ್ಷ ಮತ್ತು ರಮೇಶ್, ಪ್ರೌಢಶಾಲಾ ವಿಭಾಗದ 400ಮೀ ರಿಲೆ ಯಲ್ಲಿ ದಿನೇಶ್, ಕಾರ್ತಿಕ್, ಅಬ್ದುಲ್ ಶಮಿ, ಸಂಜಯ್, ನಾಯಕ್ ಮತ್ತು ಪ್ರೀತಮ್, ಬಾಲಕಿಯರ ವಿಭಾಗದ ಸವಿತಾ, ಅನಿತ, ದಿವ್ಯ ಮತ್ತು ಶ್ವೇತಾ, 200ಮೀ ಒಟದಲ್ಲಿ ಬಶೀರಾ, ಗುಂಡು ಎಸೆತದಲ್ಲಿ ಅರುಣ್, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಕ್ಷಿತ್ ಡಿವಿ, ಅಭಿಲಾಷ್, ರೆನೋ ಕೆರೊಬ್ ಮತ್ತು ಮದನ್ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ಮತ್ತು ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. 

ಈ ಸಂದರ್ಭದಲ್ಲಿ ಪ್ರಾಥಮಿಕ ಮುಖ್ಯಶಿಕ್ಷಕಿ ವೀಣಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಶ್ಶಿಂತ ಡಿಸೋಜ, ದೈಹಿಕ ಶಿಕ್ಷಕ ಪ್ರಸಾದ್ ಸ್ವಾಮಿ ಮತ್ತು ರಾಜಕಣ್ಣನ್, ಉಪನ್ಯಾಸಕ ವಿನೋದ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News