ಅನೈತಿಕ ಸಂಬಂಧದ ಶಂಕೆ: ತಂದೆ, ಪತ್ನಿಯ ಹತ್ಯೆ

Update: 2019-10-06 07:29 GMT

ವಿಜಯಪುರ, ಅ.6: ಅನೈತಿಕ ಸಂಬಂಧದ ಶಂಕೆಯಲ್ಲಿ ವ್ಯಕ್ತಿಯೋರ್ವ ತಂದೆ ಹಾಗೂ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ನಡೆದಿದೆ.

ಮಾಳಪ್ಪ ಪೂಜಾರಿ(65) ಹಾಗೂ ಆತನ ಸೊಸೆ ರೇಣುಕಾ ಪೂಜಾರಿ(35) ಕೊಲೆಯಾದವರು. ರೇಣುಕಾ ಅವರ ಪತಿ ಪುಟ್ಟಣ್ಣ ಕೊಲೆ ಆರೋಪಿಯಾಗಿದ್ದಾನೆ. ಮೂಲತಃ ಇಂಡಿ ತಾಲೂಕಿನ ಶಿರಗೂರ ಗ್ರಾಮದ ನಿವಾಸಿಗಳಾಗಿರುವ ಇವರು ಹೊಟ್ಟೆಪಾಡಿಗಾಗಿ ಖೇಡಗಿಯ ಶ್ರೀಶೈಲ ಸೊನ್ನ ಎಂಬವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.

ತಂದೆ ಹಾಗೂ ಪತ್ನಿ ನಡುವೆ ಅನೈತಿಕ ಇದೆ ಎಂಬ ಶಂಕೆಯಲ್ಲಿ ಪುಟ್ಟಣ್ಣ ಇವರಿಬ್ಬರನ್ನು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News