ವಿದ್ಯುತ್ ಸ್ಪರ್ಶಿಸಿ ಮಹಾರಾಷ್ಟ ಮೂಲದ ವ್ಯಕ್ತಿ ಮೃತ್ಯು

Update: 2019-10-10 16:55 GMT

ಕೊಳ್ಳೇಗಾಲ, ಅ.10: ವಿದ್ಯುತ್ ವಯರ್ ಅನ್ನು ಜೋಡಣೆ ಮಾಡುವ ವೇಳೆ ವಿದ್ಯುತ್ ಶಾಕ್‍ನಿಂದ ಮಹಾರಾಷ್ಟ ಮೂಲದ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ತಾಲೂಕಿನ ತೇರಂಬಳ್ಳಿ ಗ್ರಾಮದ ಬಳಿ ನಡೆದಿದೆ.

ಮಹಾರಾಷ್ಟದ ರಾಯಗಡ ಜಿಲ್ಲೆ ಪೇನ್ ತಾಲೂಕು ಗಾಗೋದ ಬುದ್ರುಕ್ ಗ್ರಾಮದ ನರೇಶ ಅನಂತ್ ಪವಾರ್ (30) ಎಂಬವರೇ ಮೃತ್ತ ವ್ಯಕ್ತಿ.

ಇವರು ತಾಲೂಕಿನ ತೇರಂಬಳ್ಳಿ ಗ್ರಾಮದ ಕೆರೆಯ ಬಳಿ ಟೆಂಟ್ ಹಾಕಿಕೊಂಡು ಜಾಲಿ ಮರದ ಬುಡಗಳನ್ನು ಕಡಿದು ಇದ್ದಿಲು ಮಾಡಿ ಮಾರಾಟ ಜೀವನ ನಡೆಸುತ್ತಿದ್ದರು. ಎಂದಿನಂತೆ ಇಂದು ಕೂಡಾ ಕೆಲಸ ಮುಗಿಸಿ ಟೆಂಟ್ ಬಳಿ ಬಂದಾಗ ಪಕ್ಕದ ಕಂಬದಿಂದ ಟೆಂಟ್‍ಗೆ ಎಳೆದುಕೊಂಡಿದ್ದ ವಿದ್ಯುತ್ ಸಂಪರ್ಕ ಇಲ್ಲದನ್ನು ನೋಡಿದ ಅವರು, ವಿದ್ಯುತ್ ವಯರ್ ರಿಪೇರಿಗೆ ಮುಂದಾಗಿದ್ದು, ಈ ಸಂಧರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗಲಿ ಪವಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಈ ಸಂಬಂಧ ಮೃತನ ಪತ್ನಿ ಸೀತಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಶವಪರೀಕ್ಷೆ ನಡೆಸಿ ಬಳಿಕ ಅವರ ವಾರಸುದಾರರಿಗೆ ಒಪ್ಪಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News