ಬೋರ್ ವೆಲ್ ಕೊರೆಯುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಮೃತ್ಯು

Update: 2019-10-12 12:49 GMT

ಹಾಸನ, ಅ.12: ಕೊಳವೆ ಬಾವಿ ಕೊರೆಯುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಗಾಂಧಿ ವೃತ್ತದ ಬಳಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ .

ತಮಿಳುನಾಡು ಮೂಲದ ಪ್ರಭು (42 ) ಹಾಗೂ ಒಡಿಶ್ಶಾ ಮೂಲದ ಕಿಲ್ಲಿಸ್( 30 )ಮೃತಪಟ್ಟ ಕಾರ್ಮಿಕರಾಗಿದ್ದು. ಬೋರ್ ವೆಲ್ ಲಾರಿ ನಿಂತಿದ್ದ ಸ್ಥಳದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ತಗಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಲಾರಿಯಿಂದ ಪೈಪ್ ಕೆಳಗಿಳಿಸುವಾಗ ವಿದ್ಯುತ್ ಲೈನ್ ತಗಿಲಿದ ಕಾರಣ ಈ ದುರ್ಘಟನೆ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸರ್ಕಾರಿ ಶವಾಗಾರದಲ್ಲಿ ಇರಿಸಲಾಗಿದ್ದು, ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News