ಚಿಕ್ಕಮಗಳೂರು: ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿಗ್ರಹ ಒಯ್ಯಲು ಅವಕಾಶ ನೀಡಲು ಒತ್ತಾಯಿಸಿ ಧರಣಿ

Update: 2019-10-13 07:29 GMT

ಚಿಕ್ಕಮಗಳೂರು: ಶೋಭಾಯಾತ್ರೆ ಮೆರವಣಿಗೆಯಲ್ಲಿ ಗುರುದತ್ತಾತ್ರೇಯ ಶಿಲಾಮೂರ್ತಿ ಒಯ್ಯಲು ಅವಕಾಶ ನೀಡಬೇಕು ಎಂದು ಶ್ರೀರಾಮಸೇನೆ ಕಾರ್ಯಕರ್ತರು, ಮುಖಂಡರು ಧರಣಿ ನಡೆಸಿದರು.

‘ವಿಗ್ರಹ ಮೆರವಣಿಗೆಗೆ ಅವಕಾಶ ನೀಡದೆ ಸರ್ಕಾರ ದ್ರೋಹ ಮಾಡಿದೆ. ಗುರುದತ್ತಾತ್ರೇಯರಿಗೆ ಅವಮಾನ ಮಾಡಿದೆ. ಗುರುಗಳಿಗೆ ಗೌರವ ಸಲ್ಲುವವರೆಗೆ ತಲೆಗೂದಲು, ದಾಡಿ ಬೋಳಿಸಲ್ಲ, ಸನ್ಮಾನ ಸ್ವೀಕರಿಸಲ್ಲ ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಂಧರ ಕುಲಕರ್ಣಿ ಹೇಳಿದರು.

ಈ ಸಂದರ್ಭ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News