ಮಾಧ್ಯಮಗಳ ಮೇಲೆ ಸರಕಾರದ ಆಕ್ರಮಣ: ಕಾಂಗ್ರೆಸ್ ಆರೋಪ
Update: 2019-10-13 12:33 GMT
ಬೆಂಗಳೂರು, ಅ. 13: ‘ಪಾರದರ್ಶಕ ಆಡಳಿತ ಕೊಡಲಾಗದ, ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿರುವ ಬಿಜೆಪಿ ನೇತೃತ್ವದ ಸರಕಾರ ಮಾಧ್ಯಮ ಮತ್ತು ಜನತೆಯ ಹಕ್ಕುಗಳ ಮೇಲೆ ಆಕ್ರಮಣ ಮಾಡಿದೆ’ ಎಂದು ಕೆಪಿಸಿಸಿ ಆರೋಪಿಸಿದೆ.
ರವಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕಾರ ಮಾಡಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮಾಧ್ಯಮ ಪ್ರತಿನಿಧಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ.
ವಿಧಾನಸೌಧದಲ್ಲಿ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕಾರ ಮಾಡಿ ಗಾಂಧಿ ಪ್ರತಿಮೆ ಬಳಿ ಮಾಧ್ಯಮಗಳಿಂದ ಸಾಂಕೇತಿಕ ಪ್ರತಿಭಟನೆ.
— Karnataka Congress (@INCKarnataka) October 13, 2019
ಪಾರದರ್ಶಕ ಆಡಳಿತ ಕೊಡಲಾಗದ, ನೆರೆ ಪರಿಹಾರದಲ್ಲಿ ವಿಫಲವಾದ @BJP4Karnataka ಸರ್ಕಾರ ಮಾಧ್ಯಮ & ಜನತೆಯ ಹಕ್ಕುಗಳ ಮೇಲೆ ಆಕ್ರಮಣ ಮಾಡಿದೆ.#BJPbetraysKarnataka pic.twitter.com/XQPvffdjt3