ವಿಜಯಪುರ : ಉಸಿರುಗಟ್ಟಿಸಿ ವೃದ್ಧೆಯ ಕೊಲೆ

Update: 2019-10-14 07:42 GMT

ವಿಜಯಪುರ : ಉಸಿರು ಗಟ್ಟಿಸಿ ವೃದ್ಧೆಯ ಕೊಲೆಗೈದ ಘಟನೆ ವಿಜಯಪುರ ನಗರದ ಜನ್ನತ್ ಹಾಲ್ ಹಿಂಭಾಗದ ಮನೆಯಲ್ಲಿ ನಡೆದಿದೆ.

ರೇಖಾ ಶಿವಶಂಕರ್ ದೇಶಮಾನೆ (69) ಮೃತರು ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ವೃದ್ಧೆಯನ್ನು ಉಸಿರು ಗಟ್ಟಿಸಿ ಕೊಲೆಗೈದು ನಂತರ ದೇಹವನ್ನ ಸೀರೆಯಿಂದ ಕಟ್ಟಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಪ್ರಕಾಶ ನಿಕ್ಕಂ, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದಾರೆ.

ಈ ಬಗ್ಗೆ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News