ಕಲಬುರ್ಗಿ: ಸ್ಥಳಾಂತರಗೊಂಡಿದ್ದ ಕನ್ಹಯ್ಯ ಕುಮಾರ್ ಕಾರ್ಯಕ್ರಮ ರದ್ದು
Update: 2019-10-15 08:04 GMT
ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರ ಸ್ಥಳಾಂತರಗೊಂಡ ಉಪನ್ಯಾಸ ಕಾರ್ಯಕ್ರಮವನ್ನು ರಾಜ್ಯಪಾಲರಾದ ವಜುಬಾಯಿ ವಾಲಾ ಅನುಮತಿ ನಿರಾಕರಿಸುವ ಮೂಲಕ ರದ್ದಾಗಿದೆ.
ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಿದ ಆಯೋಜಕರು ಇಂದು ಮಧ್ಯಾಹ್ನ 12 ಗಂಟೆಗೆ ಕಲಬುರ್ಗಿಯ ತಿಮ್ಮಾಪುರ ಸರ್ಕಲ್ ಬಳಿ ಇರುವ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ಹಯ ಕುಮಾರ್ ಉಪನ್ಯಾಸಕ್ಕೆ ಏರ್ಪಾಟು ಮಾಡಿದ್ದರು. ಕನ್ಹಯ್ಯ ಭಾಷಣ ಕೇಳಲು ಸಾವಿರಾರು ಜನ ಜಮಾಯಿಸಿದ್ದರು.
ಏಕಾಏಕಿ ಕಾರ್ಯಕ್ರಮ ರದ್ದುಪಡಿಸಿದ್ದರ ವಿರುದ್ಧ ಪ್ರತಿರೋಧ ಭುಗಿಲೆದ್ದಿದ್ದು ನೂರಾರು ಜನ ರಾಜ್ಯಪಾಲರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಅಂಬೇಡ್ಕರ್ ಕಾಲೇಜ್ ನಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದೆ.