ಕೆಪಿಟಿಸಿಎಲ್ ಕಚೇರಿಯಲ್ಲಿ ಕಳ್ಳತನ: ಆರೋಪಿಗಳ ಬಂಧನ
Update: 2019-10-16 12:10 GMT
ತುಮಕೂರು, ಅ.16: ನಗರದ ಕೋತಿತೋಪಿನಲ್ಲಿರುವ ಕೆಪಿಟಿಸಿಎಲ್ ಕಚೇರಿಯಲ್ಲಿನ ಪರಿವರ್ತಕ ಪರೀಕ್ಷಾ ಕೇಂದ್ರದ ಬಿಲ್ಡಿಂಗ್ ನಲ್ಲಿ 7,86,000 ರೂ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿರ್ವಾಣಿ ಲೇಔಟ್ನ ಕುಮಾರ, ದಿಬ್ಬೂರು ಜನತಾ ಕಾಲೋನಿಯ ಶಿವಾಜಿ ಎಂಬವರನ್ನು ವಶಕ್ಕೆ ಪಡೆದಿರುವ ಪೊಲೀಸರು 4.76 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಮುಬಾರಕ್, ಗೌಸ್ ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ.
ಕಾರ್ಯಾಚರಣೆಗಾಗಿ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ಪಾರ್ವತಮ್ಮ, ಹಾಗೂ ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ಮುನವ್ವರ್ ಪಾಷ, ಹನುಮ ರಂಗಯ್ಯ, ಮಂಜುನಾಥ, ರಂಜಿತ್ ಕುಮಾರ್ ಅವರನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಸಿ ಕೃಷ್ಣ ಐಪಿಎಸ್ ಅವರು ಅಭಿನಂದಿಸಿದ್ದಾರೆ.