ಮುಂಬೈಗೆ ರೋಚಕ ಜಯ

Update: 2019-10-16 18:43 GMT

ಬೆಂಗಳೂರು, ಅ.16: ಗರಿಷ್ಠ ಮೊತ್ತದ ವಿಜಯ ಟ್ರೋಫಿಯ ‘ಎ ’ಗುಂಪಿನ ಮತ್ತೊಂದು ಪಂದ್ಯದಲ್ಲಿ ಮುಂಬೈ ತಂಡ ಜಾರ್ಖಂಡ್ ತಂಡವನ್ನು 39 ರನ್‌ಗಳ ಅಂತರದಿಂದ ರೋಚಕವಾಗಿ ಮಣಿಸಿತು.

 ಮುಂಬೈನ ಅತ್ಯಂತ ಕಿರಿಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿದು 203 ರನ್ ಗಳಿಸಿ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 358ಕ್ಕೆ ತಲುಪಿಸಿದರು. ಜೈಸ್ವಾಲ್‌ಗೆ ಉತ್ತಮ ಸಾಥ್ ನೀಡಿದ ವಿಕೆಟ್‌ಕೀಪರ್ ಆದಿತ್ಯ ತಾರೆ(78, 102 ಎಸೆತ)ಮೊದಲ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 200 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.

ಗೆಲ್ಲಲು ಕಠಿಣ ಸವಾಲು ಬೆನ್ನಟ್ಟಿದ ಜಾರ್ಖಂಡ್ 46.4 ಓವರ್‌ಗಳಲ್ಲಿ 319 ರನ್‌ಗಳಿಗೆ ಆಲೌಟಾಗಿ ದಿಟ್ಟ ಹೋರಾಟವನ್ನು ನೀಡಿತು. ಜಾರ್ಖಂಡ್ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ವಿರಾಟ್ ಸಿಂಗ್ ಆಕರ್ಷಕ ಶತಕ(100, 77 ಎಸೆತ, 12 ಬೌಂಡರಿ,2 ಸಿಕ್ಸರ್)ಗಳಿಸಿದರು. ಅನುಕೂಲ್ ರಾಯ್(46), ನಾಯಕ ಇಶಾನ್ ಕಿಶನ್(34)ಎರಡಂಕೆಯ ಸ್ಕೋರ್ ಗಳಿಸಿದರು.

ಮುಂಬೈ ಬೌಲಿಂಗ್ ವಿಭಾಗದಲ್ಲಿ ಹಿರಿಯ ಬೌಲರ್ ಧವಳ್ ಕುಲಕರ್ಣಿ(5-37)ಐದು ವಿಕೆಟ್ ಗೊಂಚಲು ಪಡೆದರು. ಶಿವಂ ದುಬೆ(2-66) ಹಾಗೂ ಸಿದ್ದೇಶ್ ಲಾಡ್(2-32)ತಲಾ 2 ವಿಕೆಟ್‌ಗಳನ್ನು ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News