ಹನೂರು: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ

Update: 2019-10-19 18:41 GMT

ಹನೂರು, ಅ.19: ಕನಕಾಂಬರ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ರಾಮಾಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೌದಳ್ಳಿ ಗ್ರಾಮದ ಸಣ್ಣಮಾದ್ದಪ್ಪ ಬಂಧಿತ ಆರೋಪಿ.

ಕೌದಳ್ಳಿ ಗ್ರಾಮದ ಸಣ್ಣಮಾದ್ದಪ್ಪ ತನ್ನ ಜಮೀನಿನಲ್ಲಿ ಕನಕಾಂಬರ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೋಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಸುಮಾರು 43 ಕೆಜಿ ಗಳಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.

ರಾಮಾಪುರ ಠಾಣೆಯ ಇನ್ಸ್‍ಪೆಕ್ಟರ್ ಮನೋಜ್‍ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸಿಬ್ಬಂದಿಗಳಾದ ಎಸ್.ಎಲ್‍.ಲಿಂಗರಾಜು, ಬೊಮ್ಮೆಗೌಡ, ಬಸವರಾಜು, ನಾಗೇಂದ್ರ, ರಘು, ಮಾದೇಶ್, ಸುರೇಶ್, ರವಿಪ್ರಸಾದ್, ಶ್ರೀನಿವಾಸ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News