ವಿಜಯಪುರ: ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಮೃತ್ಯು

Update: 2019-10-20 04:58 GMT

ವಿಜಯಪುರ: ಹೆಗ್ಗಣ ಕಚ್ಚಿದ ಪರಿಣಾಮ ಮಲಗಿದ್ದ ಆರು ತಿಂಗಳ ಗಂಡು ಮಗು ಮೃತಪಟ್ಟ ದಾರುಣ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊಸೂರು‌ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಗೀತಾ ಹಾಗೂ ಗೋಲಪ್ಪ ಎಂಬ ದಂಪತಿಯ ಆರು ತಿಂಗಳ ಮಗು ಹೆಗ್ಗಣ ಕಚ್ಚಿದ ಪರಿಣಾಮ ಮೃತಪಟ್ಟಿದೆ. ನಿದ್ದೆಯಲ್ಲಿದ್ದ ಕಾರಣ ಹೆಗ್ಗಣ ದಾಳಿ ಪೋಷಕರಿಗೆ ಅರಿವಾಗಲಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News