ವಿದ್ಯಾರ್ಥಿಗಳಿಂದ ಉರ್ದು ಕವಿ ಇಕ್ಬಾಲ್ ರ ಹಾಡು ಹಾಡಿಸಿದ ಶಿಕ್ಷಕನ ಅಮಾನತು ವಾಪಸ್

Update: 2019-10-20 10:00 GMT

ಲಕ್ನೋ, ಅ.20: ಉರ್ದು ಕವಿ ಮುಹಮ್ಮದ್ ಇಕ್ಬಾಲ್ ಅವರ ಹಾಡನ್ನು ಹಾಡಿಸಿದ್ದಕ್ಕಾಗಿ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿದ್ದ ಆದೇಶವನ್ನು ಫಿಲಿಬಿಟ್ ಜಿಲ್ಲಾ ಶಿಕ್ಷಣಾಧಿಕಾರಿ ತಾತ್ಕಾಲಿಕವಾಗಿ ಹಿಂಪಡೆದಿದ್ದು, ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದಾರೆ.

ಇಲ್ಲಿನ ಶಿಕ್ಷಕ ಫುರ್ಕಾನ್ ಅಲಿ ವಿದ್ಯಾರ್ಥಿಗಳಿಂದ ಧಾರ್ಮಿಕ ಹಾಡುಗಳನ್ನು ಹಾಡಿಸುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ದೂರು ನೀಡಿದ್ದ ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ ಫುರ್ಕಾನ್ ಅಲಿ 'ಸಾರೆ ಜಹಾಂಸೆ ಅಚ್ಚಾ' ಹಾಡನ್ನು ಬರೆದ ಕವಿ ಇಕ್ಬಾಲ್ ಅವರ 'ಲಬ್ ಪೆ ಆತೀ ಹೆ ದುಆ' ಹಾಡನ್ನು ಹಾಡಿಸುತ್ತಿದ್ದರು ಎಂದು ನಂತರ ತಿಳಿದುಬಂದಿತ್ತು.

ಶಿಕ್ಷಕನ ಅಮಾನತು ವಿರೋಧಿಸಿ ಈ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ತರಗತಿಗಳನ್ನು ಬಹಿಷ್ಕರಿಸಿದ್ದರು. ಇದೀಗ ಮಾನವೀಯತೆಯ ಆಧಾರದಲ್ಲಿ ಫುರ್ಖಾನ್ ಅಲಿ ವಿರುದ್ಧದ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News