ಸಾವರ್ಕರ್ ಗಾಂಧಿ ಕೊಲೆ ಆರೋಪಿಯಲ್ಲ ಎಂದು ಹೇಳಲಾಗದು: ಸಿದ್ದರಾಮಯ್ಯ

Update: 2019-10-22 10:51 GMT

ಹುಬ್ಬಳ್ಳಿ, ಅ.22: ಸಾವರ್ಕರ್ ಬಗ್ಗೆ ಈಗಾಗಲೇ ಹೇಳಿಕೆ ನೀಡಿದ್ದು, ಅದಕ್ಕೆ ನಾನು ಬದ್ದವಾಗಿದ್ದೇನೆ. ಮಹಾತ್ಮ ಗಾಂಧೀಜಿಯವರ ಕೊಲೆಯಲ್ಲಿ ಅವರು ಕೂಡಾ ಒಬ್ಬ ಆರೋಪಿಯಾಗಿದ್ದು, ಸರಿಯಾದ ಸಾಕ್ಷಿಗಳ ಕೊರತೆಯಿಂದಾಗಿ ಅವರು ಹೊರಬಂದಿರಬಹುದು.‌ ಹಾಗಂತ ಅವರು ಆರೋಪಿಯೇ ಅಲ್ಲವೆಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಹಿಂದೂತ್ವ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಅವರಿಗೆ ಪ್ರಶಸ್ತಿ ಕೊಡುವ ಬದಲು ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ನೀಡಿ ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News