ರಾಜ್ಯದಲ್ಲಲ್ಲ, ಮೋದಿ ಎದುರು ಅಸಮಾಧಾನ ಹೊರ ಹಾಕಿ: ಕಾಂಗ್ರೆಸ್ ಆಗ್ರಹ

Update: 2019-10-22 12:28 GMT

ಬೆಂಗಳೂರು, ಅ.22: ಕೇಂದ್ರ ಸರಕಾರ ಕಷ್ಟ ಕಾಲದಲ್ಲಿ ರಾಜ್ಯಕ್ಕೆ ಸ್ಪಂದಿಸಬೇಕಿತ್ತು ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು, ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದ ಭೀಕರ ಪ್ರವಾಹಕ್ಕೆ ಸ್ಪಂದಿಸದೇ ದ್ರೋಹ ಎಸಗಿದ ಕೇಂದ್ರದ ವಿರುದ್ಧ 80 ದಿನಗಳ ನಂತರ ಕೊನೆಗೂ ಬಿಜೆಪಿಯ ಸಂಸದರೊಬ್ಬರೂ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಲ್ಲ, ಅಸಮಾಧಾನವನ್ನು ತೋರಬೇಕಿರುವುದು ನರೇಂದ್ರ ಮೋದಿ ಅವರ ಮುಂದೆ. ಸಂಸದ ಬಿ.ಎನ್.ಬಚ್ಚೇಗೌಡರು ಹಾಗೂ ಉಳಿದ 24 ಉತ್ತರ ಕುಮಾರರರು ಕೇಂದ್ರದಿಂದ ಪರಿಹಾರಕ್ಕೆ ಒತ್ತಾಯಿಸಬೇಕಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News