ಅಧಿಕಾರಿಗಳ ಮಾತಿಗೆ ಕಿವಿಕೊಟ್ಟರೆ ಅಭಿವೃದ್ಧಿಯಾಗಲ್ಲ: ಶಾಸಕ ಯತ್ನಾಳ್

Update: 2019-10-22 14:00 GMT

ವಿಜಯಪುರ, ಅ.22: ಅಧಿಕಾರಿಗಳ ಮಾತಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಕಿವಿಕೊಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. 

ಮಂಗಳವಾರ ನಗರದಲ್ಲಿ ವಿಜಯಪುರ-ಯಶವಂತಪುರ ನೂತನ ರೈಲು ಸೇವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನೋಪಯೋಗಿ ರೈಲು ಸೇವೆ ಮತ್ತು ರೈಲು ನಿಲುಗಡೆಗೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇದು ಕಾರ್ಯಸಾಧುವಲ್ಲ ಎಂದು ನೆಪ ಹೇಳುತ್ತಾರೆ. ಈ ರೀತಿಯ ಅಧಿಕಾರಿಗಳಿಗೆ ಕಿವಿಗೊಡಬೇಡಿ. ಅಂತಹ ಅಧಿಕಾರಿಗಳ ಬಳಿ ಖಡಕ್ಕಾಗಿ ಮಾಡಲೇಬೇಕೆಂದು ಆದೇಶಿಸಲು ತಿಳಿಸಿದರು.

ಇದೇ ವೇಳೆ ವಿಜಯಪುರ-ಯಶವಂತಪುರ ನೂತನ ರೈಲು ವೇಳಾಪಟ್ಟಿಗೂ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ರೈಲು ಪ್ರಾರಂಭಿಸುವುದು ಸರಿಯಲ್ಲ. ಸಂಜೆ 7ಕ್ಕೆ ವಿಜಯಪುರದಿಂದ ರೈಲು ಹೊರಡುವಂತಾಗಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News