64 ಗಣ್ಯರಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Update: 2019-10-28 15:06 GMT

ಬೆಂಗಳೂರು, ಅ.28: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 64 ಮಂದಿ ಗಣ್ಯರಿಗೆ, ಸಂಸ್ಥೆಗಳಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸೋಮವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದರು.

ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನವೆಂಬರ್ 1ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿದೆ.

ಸಾಹಿತ್ಯ: 

►ಡಾ.ಮಂಜಪ್ಪ ಶೆಟ್ಟಿ ಮಸಗಲಿ

►ಪ್ರೊ. ಬಿ.ರಾಜಶೇಖರಪ್ಪ

►ಚಂದ್ರಕಾಂತ ಕರದಳ್ಳಿ

►ಡಾ.ಸರಸ್ಪತಿ ಚಿಮ್ಮಲಗಿ

ರಂಗಭೂಮಿ 

►ಪರಶುರಾಮಸಿದ್ದಿ
►ಪಾಲ್ ಸುದರ್ಶನ್
►ಹೂಲಿ ಶೇಖರ್
►ಎನ್.ಶಿವಲಿಂಗಯ್ಯ
►ಡಾ.ಎಚ್.ಕೆ.ರಾಮನಾಥ
►ಭಾರ್ಗವಿ ನಾರಾಯಣ

ಸಂಗೀತ 

►ಛೋಟೆ ರೆಹಮತ್ ಖಾನ್
►ನಾಗವಲ್ಲಿ ನಾಗರಾಜ್
►ಡಾ.ಮುದ್ದು ಮೋಹನ
►ಶ್ರೀನಿವಾಸ ಉಡುಪ

ಜಾನಪದ 

►ನೀಲ್ ಗಾರರು ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ
►ಹೊಳಬಸಯ್ಯ ದುಂಡಯ್ಯ ಸಂಬಳದ
►ಭೀಮಸಿಂಗ್ ಸಕಾರಾಮ್ ರಾಥೋಡ್
►ಉಸ್ಮಾನ್ ಸಾಬ್ ಖಾದರ್ ಸಾಬ್
►ಕೊಟ್ರೇಶ ಚೆನ್ನಬಸಪ್ಪ ಕೊಟ್ರೆಪ್ಪನವರ
►ಕೆ.ಆರ್. ಹೊಸಳಯ್ಯ

ಶಿಲ್ಪಕಲೆ 

►ವಿ.ಎ.ದೇಶಪಾಂಡೆ
►ಕೆ.ಜ್ಞಾನೇಶ್ವರ

ಚಿತ್ರಕಲೆ 

►ಯು. ರಮೇಶ್ ರಾವ್
►ಮೋಹನ ಸೀತನೂರು

ಕ್ರೀಡೆ 

►ವಿಶ್ವನಾಥ್ ಭಾಸ್ಕರ್ ಗಾಣಿಗ
►ಚೇನಂಡ ಎ.ಕುಟ್ಟಪ್ಪ
►ನಂದಿತ ನಾಗನಗೌಡರ್

ಯೋಗ 

►ಶ್ರೀಮತಿ ವನಿತಕ್ಕ
►ಕು. ಖುಷಿ

ಯಕ್ಷಗಾನ 

►ಶ್ರೀಧರ ಭಂಡಾರಿ ಪುತ್ತೂರು

ಬಯಲಾಟ 

►ವೈ. ಮಲ್ಲಪ್ಪ ಗವಾಯಿ

ಚಲನಚಿತ್ರ 

►ಶೈಲಶ್ರೀ

ಸಮಾಜಸೇವೆ 

►ಎಸ್.ಜಿ. ಭಾರತಿ
►ಶ್ರೀ ಕತ್ತಿಗೆ ಚನ್ನಪ್ಪ

ಕೃಷಿ 

►ಬಿ.ಕೆ.ದೇವರಾಜ್
►ವಿಶ್ವೇಶ್ವರ ಸಜ್ಜನ್

ಪರಿಸರ 

►ಸಾಲುಮರದ ವೀರಾಚಾರ್
►ಶಿವಾಜಿ ಛತ್ರಪ್ಪ ಕಾಗಣಿಕರ್

ಕಿರುತೆರೆ 

►ಜಯಕುಮಾರ ಕೊಡಗನೂರ, ಕಿರುತರೆ

ಶಿಕ್ಷಣ 

►ಎಸ್.ಆರ್.ಗುಂಜಾಳ್
►ಪ್ರೊ.ಟಿ.ಶಿವಣ್ಣ
►ಡಾ.ಕೆ.ಚಿದಾನಂದಗೌಡ
►ಡಾ.ಗುರುರಾಜ ಕರ್ಜಗಿ

ಸಂಕೀರ್ಣ 

►ಡಾ.ವಿಜಯ ಸಂಕೇಶ್ವರ್
►ಎಸ್.ಟಿ.ಶಾಂತ ಗಂಗಾಧರ್
►ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು
►ಲೆಫ್ಟಿನೆಂಟ್ ಜನರಲ್ ಬಿ.ಎಸ್.ಬಿ.ಎಂ.ಪ್ರಸಾದ
►ಡಾ. ನಾ.ಸೋಮೇಶ್ವರ್
►ಶ್ರೀ.ಕೆ.ಪ್ರಕಾಶಶೆಟ್ಟಿ, ಅಧ್ಯಕ್ಷರು ಎಂ.ಆರ್.ಜಿ.ಗ್ರೂಪ್

ಪತ್ರಿಕೋದ್ಯಮ 

►ಬಿ.ವಿ. ಮಲ್ಲಿಕಾರ್ಜುನಯ್ಯ

ಸಹಕಾರ 

►ರಮೇಶ್ ವೈದ್ಯ

ಸಂಘ ಸಂಸ್ಥೆ 

►ಪ್ರಭಾತ್ ಆರ್ಟ ಇಂಟರ್ ನ್ಯಾಷನಲ್
►ಶ್ರೀ ಪಂಥಂಜಲಿ ಯೋಗ ಶಿಕ್ಷಣ ಸಮಿತಿ, (ರಿ) ಕರ್ನಾಟಕ, ಹನುಮಂತಪುರ

ವೈದ್ಯಕೀಯ 

►ಡಾ. ಹನುಮಂತರಾಯ ಪಂಡಿತ್
►ಡಾ. ಆಂಜನಪ್ಪ
►ಡಾ. ನಾಗರತ್ನ
►ಡಾ. ಜಿ.ಟಿ. ಸುಭಾಷ್
►ಡಾ. ಕೃಷ್ಣ ಪ್ರಸಾದ

ನ್ಯಾಯಾಂಗ 

►ಕುಮಾರ್. ಎನ್

ಹೊರನಾಡು 

►ಜಯವಂತ ಮನ್ನೊಳಿ
►ಶ್ರೀ ಗಂಗಾಧರ್ ಬೇವಿನಕೊಪ್ಪ
►ಬಿ.ಜಿ. ಮೋಹನ್ ದಾಸ್

ಗುಡಿ ಕೈಗಾರಿಕೆ 

►ನವರತ್ನ ಇಂದು ಕುಮಾರ

ವಿಮರ್ಶೆ 

►ಕೆ.ವಿ. ಸುಬ್ರಹ್ಮಣ್ಯಂ

ರಾಜ್ಯೋತ್ಸವ ಪ್ರಶಸ್ತಿಗೆ ಎಲ್ಲ ಜಿಲ್ಲೆಗಳ, ಎಲ್ಲ ವರ್ಗದವರಿಗೂ ಆದ್ಯತೆ ನೀಡಿದ್ದು, ಪ್ರಶಸ್ತಿ ಆಯ್ಕೆಯಲ್ಲಿ ಯಾವುದೇ ವ್ಯಕ್ತಿಗಳ ವೈಯಕ್ತಿಕ ಬೇಡಿಕೆಗಳಿಗೆ ಮನ್ನಣೆ ನೀಡಿಲ್ಲ. ರಾಜ್ಯದ 64 ಮಂದಿ ಗಣ್ಯರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News