ಕೊಳ್ಳೇಗಾಲ: ಜೂಜಾಡುತ್ತಿದ್ದ ಆರು ಮಂದಿ ಬಂಧನ

Update: 2019-10-29 12:32 GMT

ಕೊಳ್ಳೇಗಾಲ,ಅ.29: ಜೂಜಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಹರಳೆ ಗ್ರಾಮದ ಹರೀಶ್, ಭೈರನಾಯಕ, ಮಾದೇಶ, ಪ್ರಕಾಶ್, ಸಂತೋಷ್, ಸುರೇಶ್ ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 3,700 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರಳೇ ಗ್ರಾಮದ ಕಾವೇರಿ ನದಿ ಸಮೀಪವಿರುವ ಪಂಪ್‍ಹೌಸ್ ಬಳಿಯಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಉಪನೀರಿಕ್ಷಕ ವಿ.ಸಿ.ಅಶೋಕ್‍ ಕುಮಾರ್ ತಮ್ಮ ತಂಡದೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News