ಹನೂರಿನಲ್ಲಿ ಧಾರಾಕಾರ ಮಳೆ: ಹಳ್ಳದಲ್ಲಿ ಕೊಚ್ಚಿ ಹೋದ ಮೂರು ಎಮ್ಮೆಗಳು
Update: 2019-10-31 18:42 GMT
ಹನೂರು, ಅ.31: ತಾಲೂಕಿನ ಮಲೈಮಹದೇಶ್ವರಬೆಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡಿಸಲನತ್ತ ಗ್ರಾಮದಲ್ಲಿ ಬುಧವಾರ ಸುರಿದ ಧಾರಕಾರ ಮಳೆಗೆ ಬಾಳೆಕಡಿನ ಹಳ್ಳದಲ್ಲಿ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋದ ಘಟನೆ ನೆಡೆದಿದೆ.
ಇದೇ ಗ್ರಾಮದ ಪಾಪ್ಪಣ್ಣ ತಂಬಡಿ ಎಂಬವರು ತನ್ನ ಮೂರು ಎಮ್ಮೆಗಳನ್ನು ಮೇಯಲು ಬಾಳೆಕಡಿನಹಳ್ಳದ ಆಸು ಪಾಸಿನಲ್ಲಿ ಬಿಟ್ಟಿದ್ದಾರೆ. ಬುಧವಾರ ಮದ್ಯಾಹ್ನ ಸುರಿದ ಧಾರಕಾರ ಮಳೆಗೆ ಕಾಡಂಚಿನಿಂದ ಮಳೆ ನೀರು ರಭಸವಾಗಿ ಹರಿದ ಪರಿಣಾಮ ಇದೇ ಹಳ್ಳದಲ್ಲಿ ಮೇಯುತ್ತಿದ್ದ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ.
ಸಂಬಂಧ ಪಟ್ಟ ಅಧಿಕಾರಿಗಳು ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.