ಶಿವಮೊಗ್ಗ: ರೈಲಿಗೆ ಸಿಲುಕಿ ಮೀನು ವ್ಯಾಪಾರಿ ಮೃತ್ಯು

Update: 2019-11-07 11:35 GMT

ಶಿವಮೊಗ್ಗ, ನ. 7: ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಚಂದ್ರಮಾವಿನಕೊಪ್ಪಲು ರೈಲ್ವೆ ಹಳಿ ಬಳಿ ನಡೆದಿದೆ. 

ಸ್ಥಳೀಯ ಮೀನು ವ್ಯಾಪಾರಿ ಮುಕ್ತಿಯಾರ್ (38) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳೆದ ತಿಂಗಳ ಹಿಂದಷ್ಟೆ ಇವರ ಪತ್ನಿ ಅನಾರೋಗ್ಯದಿಂದ ಅಸುನೀಗಿದ್ದರು. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News