ಹಯವದನ ಭಟ್

Update: 2019-11-07 14:40 GMT

ಉಡುಪಿ, ನ.7: ಉಡುಪಿ ಪುತ್ತೂರು ದುರ್ಗಾಪರಮೇಶ್ವರಿ ದೇವಳದ ಅರ್ಚಕ ಮನೆತನದ ಹಿರಿಯರಾದ ಪುತ್ತೂರು ಹಯವದನ ಭಟ್ (86) ಇವರು ಬುಧವಾರ ಇಲ್ಲಿ ನಿಧನ ಹೊಂದಿದರು.

ಜೀವವಿಮಾ ನಿಗಮದ ನಿವೃತ್ತ ಅಧಿಕಾರಿಯಾಗಿದ್ದ ಪಿ.ಎಚ್.ಭಟ್, ಉಡುಪಿ ರೋಟರಿಯ ಮಾಜಿ ಅಧ್ಯಕ್ಷ, ಪುತ್ತೂರು ವಲಯ ಬ್ರಾಹ್ಮಣ ಸಮಿತಿಯ ಸ್ಥಾಪಕ ಅಧ್ಯಕ್ಷರು ಮತ್ತು ಯಕ್ಷಗಾನ ಕಲಾರಂಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ನಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ