ಶಿವಸೇನೆಯಿಂದ ಬಿಜೆಪಿಗೆ ವಂಚನೆ ಆಗಿದೆ: ಸಚಿವ ಪ್ರಭು ಚವ್ಹಾಣ್

Update: 2019-11-12 18:27 GMT

ಬೀದರ್, ನ.12: ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದಿಂದಲೇ ಬಿಜೆಪಿಗೆ ವಂಚನೆಯಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಆರೋಪಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಲು ಶಿವಸೇನೆ ಮೋಸದಾಟ ಆಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಸೇನಾ ಮುಖ್ಯಸ್ಥ ದಿ.ಬಾಳ್ ಸಾಹೇಬ್ ಠಾಕ್ರೆ ಅವರಿದ್ದ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಒಪ್ಪಂದವಾಗಿ ಅತಿ ಹೆಚ್ಚು ಸ್ಥಾನ ಗೆದ್ದವರು ಸಿಎಂ ಆಗಬೇಕು ಎಂದಿದ್ದರು. ಹೀಗಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಜನಪರ ಕೆಲಸ ಮಾಡಿದ್ದಾರೆ ಎಂದರು.

ಬಿಜೆಪಿ ಬೆಳೆಯುತ್ತಿರುವುದನ್ನು ತಡೆಯಲು ಎನ್‌ಸಿಪಿ, ಕಾಂಗ್ರೆಸ್ ನಡೆಸಿದ ಕುತಂತ್ರ ರಾಜಕೀಯದ ಪರಿಣಾಮದಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News