ಪತ್ನಿ, ಪತ್ನಿಯ ಸಂಬಂಧಿಯ ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆ

Update: 2019-11-14 18:15 GMT

ಮೈಸೂರು,ನ.14: ಪತ್ನಿಯ ಹಾಗೂ ಸಂಬಂಧಿಯನ್ನು ಕೊಲೆ ಮಾಡಿದ ಆರೋಪದಲ್ಲಿ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಲಾಗಿದೆ. ಮೈಸೂರಿನ ಉದಯಗಿರಿಯ ಬೀಡಿ ಕಾಲೋನಿ ನಿವಾಸಿ ಇಷಾಕ್ ಪಾಷಾ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿ.

2009ರಲ್ಲಿ ನಡೆದಿದ್ದ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮದ್ಯ ಕುಡಿಯಲು ಹಣ ಕೊಡದ ಪತ್ನಿ ಸಿದ್ದೀಕಿ ಬಾನುಳನ್ನು ಭೀಕರವಾಗಿ ಕೊಂದಿದ್ದು, ಕೃತ್ಯ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪತ್ನಿಯ ಸಂಬಂಧಿ ಸುರಯ್ಯಾ ಬಾನುಳನ್ನೂ ಸಹ ಇಷಾಕ್ ಪಾಷ ಕೊಂದಿದ್ದ ಎಂದು ಆರೋಪಿಸಲಾಗಿದ್ದು, ಬಳಿಕ ಪರಾರಿಯಾಗಿ 8 ವರ್ಷಗಳ ನಂತರ ಸಿಕ್ಕಿಬಿದ್ದಿದ್ದ.

ನ್ಯಾಯಾಧೀಶರಾದ ಹೊಸಮನೆ ಪುಂಡಲೀಕ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕರಾದ ಪಿ. ಪಿ. ನಾಗರಾಜು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News