ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ನಾಯಕ್ ನಾಮಪತ್ರ ಸಲ್ಲಿಕೆ
Update: 2019-11-14 18:40 GMT
ಮುಂಡಗೋಡ, ನ.14: ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಭೀಮಣ್ಣ ನಾಯಕ್ ಇಂದು ಯಲ್ಲಾಪುರದಲ್ಲಿ ನಾಮಪತ್ರ ಸಲ್ಲಿಸಿದರು. ಅವರನ್ನು ಬೆಂಬಲಿಸಲು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿದ್ದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮುಂಡಗೋಡ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರೆಹಳ್ಳಿ, ಯಲ್ಲಾಪುರ ಬ್ಲಾಕ್ ಅಧ್ಯಕ್ಷ ಡಿ.ವಿ.ಗಾಂವಕರ ಹಾಗೂ ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್.ನಾಯ್ಕ್ ಸೇರಿದಂತೆ ಅನೇಕರು ಇದ್ದರು.
ಮುಂಡಗೋಡದಿಂದ ಮುಖಂಡರಾದ ಎಚ್.ಎಮ್.ನಾಯ್ಕ್, ತಂಗಚನ್, ಧರ್ಮರಾಜ ನಡೆಗೆರ ಮುಹಮ್ಮದ್ ಗೌಸ್ ದುಂಡಶಿ, ಆಲೆಹಸನ ಬೆಂಡಿಗೇರಿ, ಮುಹಮ್ಮದ್ ಗೌಸ್ ಮಕಾನದಾರ, ಮುಹಮ್ಮದ್ ಜಾಫರ ಹಂಡಿ, ಅಹ್ಮದ್ ರಝಾ ಪಠಾಣ ಸೇರಿದಂತೆ ನೂರಾರು ಕಾರ್ಯಕರ್ತರು ಯಲ್ಲಾಪುರಕ್ಕೆ ಆಗಮಿಸಿದ್ದರು.